ಈ ಪ್ರಶ್ನೆ ನನಗೆ ಅನೇಕ ಸರಿ ಬಂದಿದೆ . ನಿಜವಾದ ಉತ್ತರ ಏನೆಂದು ಇಂದಿಗೂ ತಿಳಿದಿಲ್ಲ. ನಮ್ಮವರಿಗೂ , ನಮ್ಮ ಜೊತೆ ಇರುವವರಿಗೂ ಬಹಳ ವ್ಯತ್ಯಾಸಗಳಿವೆ . ಕೆಲವರು ನಮ್ಮೊಂದಿಗೆ ಇದ್ದರೂ ಎಂದೂ ನಮ್ಮವರು ಎನ್ನಿಸಿವುದಿಲ್ಲ . ಇದಕ್ಕೆ ಕಾರಣಗಳು ಹಲವಾರಿವೆ . ನನ್ನ ಪ್ರಕಾರ ನಾವು ಯಾರೊಂದಿಗೆ ಸಮಯ ಕಳೆದಾಗ ಮನಸ್ಸು ಉಲ್ಲಾಸವಾಗುತ್ತದೋ ಅವರೇ ನಮ್ಮವರು . ಯಾರೋ ಒಬ್ಬರ ನಿಷ್ಕಳಂಕ ನಗು , ಮಾತುಗಳು , ಸಹಾಯ ಇವೆ ಅಲ್ಲವೇ ಇನ್ನೊಬ್ಬರಿಂದ ನಾವು ಬಯಸಬೇಕಾಗಿದ್ದು . ಎಷ್ಟೋ ಸಂದರ್ಭಗಳಲ್ಲಿ ನಮ್ಮ ರಕ್ತ ಸಂಬಂಧಿಗಳು ಮಾಡಲಾರದ ಸಹಾಯವನ್ನು ಯಾರೋ ಮಾಡಿದಾಗ ನಮಗಾಗುವ ಅನುಭವ ಪದಗಳಲ್ಲಿ ವರ್ಣಿಸಲು ಅಸಾಧ್ಯ .
ನಮ್ಮಿಂದ ಬೇರೆಯವರಿಗೆ ಏನೂ ಸಹಾಯ ಮಾಡೋಕೆ ಅಗದೇ ಇದ್ದರೂ ಪರವಾಗಿಲ್ಲ , ಬೇರೆಯವರಿಗೆ ವಿನಾ ಕಾರಣ ತೊಂದರೆ ಕೊಡುವುದು ಸರಿಯಲ್ಲ. ಇವತ್ತಿನ ಸಮಾಜದಲ್ಲಿನ ಜಾತಿಪದ್ದತಿಯನ್ನು ಬುಡಸಮೇತ ನಮ್ಮ ಮನಸ್ಸಿನಿಂದ ಕಿತ್ತೆಸೆಯುವ ಜವಾಬ್ದಾರಿ ನಮ್ಮ ಮೇಲಿದೆ .
ಈ ಜಗತ್ತಿನಲ್ಲಿ ಕೆಲೆವೇ ದಿನಗಳಿರುವ ನಾವು, ನಮ್ಮ ಮುಂದಿನ ಜನಾಂಗಕ್ಕೆ ಈ ರೋಗಗ್ರಸ್ಥ ಮಾನಸಿಕ ಸ್ಥಿತಿಯನ್ನು ತುಂಬಿ ಹೋಗುವುದು ಸರಿಯಲ್ಲ . ಈ ಜಗತ್ತಿನ ಸಕಲ ಜೀವ ಜಂತುಗಳಿಗೂ ಬದುಕುವ ಹಕ್ಕಿದೆ . ಎಲ್ಲರೂ ನಮ್ಮವರೇ ಅಂದುಕೊಂಡಾಗ ಮಾತ್ರ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ.
ಬೇರೆಯವರಿಗೆ ಯಾವಾಗಲು ಒಳ್ಳೆಯದನ್ನೇ ಬಯಸೋಣ , ನ್ಯಾಯಯುತವಾಗಿ ದುಡಿಯೋಣ, ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡೋಣ , ಯಾವುದೇ ತೊಂದರೆ ಬಂದರೂ ಒಗ್ಗಟ್ಟಿನಿಂದ ಎದುರಿಸೋಣ .
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ